ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ

 

1.      ಲೋಕಲ್ ಫಂಡ್ ಸಮಿತಿಯಲ್ಲಿ  ಆಡಳಿತ ಘಟಕವನ್ನಾಗಿ ಜಿಲ್ಲೆಯನ್ನು ಸೃಜಿಸಲಾಯಿತು.

2.      ಮೈಸೂರು ಸಂಸ್ಥಾನದಲ್ಲಿ ಮೊದಲ ಭಾರಿಗೆ ಆಡಳಿತ ವಿಕೇಂದ್ರೀಕರಣವನ್ನು 1884 ರಲ್ಲಿ ಜಾರಿಗೆ ತರಲಾಯಿತು.

3.      ಜಿಲ್ಲಾ ಮಟ್ಟದಲ್ಲಿ ಆಡಳಿತ ಸುಗಮ ನಿರ್ವಹಣಗಾಗಿ ಲೋಕಲ್ ಫಂಡ್ ಸಮಿತಿ ಅಸ್ತಿತ್ವಕ್ಕೆ ಬಂದಿತು.

4.      ಲೋಕಲ್ ಫಂಡ್ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರುತಿತ್ತು.

5.      ಲೋಕಲ್ ಫಂಡ್ ಸಮಿತಿ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು ಇದ್ದರು.

6.      ಲೋಕಲ್ ಫಂಡ್ ಸಮಿತಿಯು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿ ಪ್ರಾಂತೀಯ ಸರ್ಕಾರಕ್ಕೆ ಸಲಹೆಯನ್ನು ನೀಡುತಿತ್ತು.

7.      ಸರ್ಕಾರದಿಂದ ನಾಮ ನಿರ್ದೇಶನಗೊಂಡ ಆರು ಮಂದಿ ಭೂ ಮಾಲೀಕರನ್ನು ಅಧಿಕಾರೇತರ ಸದಸ್ಯರನ್ನಾಗಿ ಲೋಕಲ್ ಫಂಡ್ ಸಮಿತಿಗೆ ನೇಮಿಸಲಾಗುತಿತ್ತು.

8.      ಲೋಕಲ್ ಫಂಡ್ ಸಮಿತಿಯು ರೂ. 1000 ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲು ಅಧಿಕಾರವಿತ್ತು.

9.      1907 ರ ಭಾರತದಲ್ಲಿ ಬ್ರಿಟೀಷ್ ಅಳ್ವಿಕೆ ಕಾಲದಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು ರಾಯಲ್ ಆಯೋಗವನ್ನು ಸೃಜಿಸಲಾಯಿತು.

10.  1907 ರ ಬ್ರಿಟೀಷ್ ಆಳ್ವಿಕೆಯಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು ಸಿ. ಇ.ಹೆಚ್. ಹಬ್ ಹೌಸ್ ರವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು.

11.  1909 ರ ಲಾಹೋರ್ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದಲ್ಲಿ ಗ್ರಾಮ ಪಂಚಾಯಿತಿ ಮತ್ತು ಮೇಲಿನ ಹಂತಗಳಿಗೆ ಚುನಾಯಿತ ಮಂಡಳಿಯನ್ನು ಆರಸಬೇಕೆಂದು ಮತ್ತು ಅವುಗಳಿಗೆ ಆರ್ಥಿಕ ಬೆಂಬಲ ನೀಡಬೇಕೆಂದು ಒತ್ತಾಯಿಸುವ ನೀರ್ಣಯವನ್ನು ಅಂಗೀಕರಿಸಲಾಯಿತು.

12.  ಗ್ರಾಮ ಸ್ವರಾಜ್ ಎಂಬ ಪರಿಕಲ್ಪನೆಯನ್ನು ಮಹಾತ್ಮ ಗಾಂಧೀಜಿ ಯವರು ಪ್ರತಿಪಾದಿಸಿದರು.

13.  ಸರ್ವೋದಯ ಎಂಬ ಪದವನ್ನು ಮಹಾತ್ಮ ಗಾಂದೀಜಿ ಯವರು ಪರಿಚಯಿಸಿದರು.

14.  ಮಹಾತ್ಮ ಗಾಂಧೀಜಿಯವರು ಸರ್ವೋದಯ ಎಂಬ ಪದವನ್ನು “ Un to The Last ” ಎಂಬ ಗ್ರಂಥದಿಂದ ಆಯ್ದುಕೊಂಡಿದ್ದಾರೆ.

15.  “ Un to the Last ” ಎಂಬ ಗ್ರಂಥವನ್ನು ಬರೆದವರು ಜಾನ್ ರಸ್ಕಿನ್ .

16.  ಅನ್ ಟು ದಿ ಲಾಸ್ಟ್ ಎಂಬ ಗ್ರಂಥವನ್ನು ಗುಜರಾತಿ ಭಾಷೆಗೆ 1908 ರಲ್ಲಿ ಮಹಾತ್ಮ ಗಾಂಧೀಜಿಯವರು ಸರ್ವೋದಯ ಎಂಬ ಶಿರ್ಷೀಕೆಯಡಿಯಲ್ಲಿ ಭಾಷಂತರಿಸಿದರು.

17.  ಜಾನ್ ರಸ್ಕಿನ್ ಬ್ರಿಟನ್ ದೇಶದ ಚಿಂತಕರು.

18.  ಮಹಾತ್ಮ ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಗ್ರಂಥ ಜಾನ್ ರಸ್ಕಿನ್ ರವರ “ Un to the last ”.

19.  ಗ್ರಾಮಗಳ ಉದ್ದಾರವೇ ದೇಶಗಳ ಉದ್ದಾರ, ಸರ್ವರ ಪ್ರಗತಿಯನ್ನು ಸಾಧಿಸಲು ಸರ್ವೋದಯ ಪರಿಕಲ್ಪನೆ ಬಳಕೆಯಾಗಬೇಕು ಎಂದು ಮಹಾತ್ಮ ಗಾಂಧೀಜಿ ಯವರು ಪ್ರತಿಪಾದಿಸಿದರು.

20.  1919 ರಲ್ಲಿ ಮಹಾತ್ಮ ಗಾಂಧೀಜಿಯವರು ಸ್ಥಳೀಯ ಸಂಸ್ಥೆಗಳ ಮಹತ್ವದ ಬಗ್ಗೆ ಸ್ವರಾಜ್ ಕಲ್ಪನೆ ಬಗ್ಗೆ ತಿಳಿಸಲು ಲೇಖನಗಳನ್ನು ನವ ಜೀವನ ಟ್ರಸ್ಟ್ ಸ್ಥಾಪಿಸಿ ಪ್ರಕಟಿಸುತ್ತಿದ್ದರು.

21.  1919 ರ ಮಾಂಟೆಗೊ ಜೇಮ್ಸ್ ಫರ್ಡ್ ಸುಧಾರಣೆ ಕಾಯಿದೆಯಲ್ಲಿ ಬ್ರಿಟೀಷರು ಸ್ಥಳೀಯ ಸ್ವಯಂ ಆಡಳಿತಕ್ಕೆ ಅವಕಾಶ ಕಲ್ಪಿಸಿದರು.

22.  1935 ರ ಭಾರತ ಸರ್ಕಾರ ಕಾಯ್ದೆಯಲ್ಲಿ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರಗಳ ಹೊಣೆಗೆ ವಹಿಸಲಾಯಿತು.

23.  ಮಹಾತ್ಮ ಗಾಂದೀಜಿಯವರು ಸ್ಥಳೀಯ ಸರ್ಕಾರಗಳು ಮತ್ತು ಭಾರತದ ಗ್ರಾಮೀಣ ಸಮುದಾಯದ ಬಗ್ಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುತ್ತಿದ್ದ ಶಿರ್ಷಿಕೆ – ವಿಲೇಜ್ ಸ್ವರಾಜ್.

Comments

Popular posts from this blog

ಅಶೋಕ್ ಮೆಹ್ತಾ ಸಮಿತಿ

ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ