ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು
1. ಭಾರತದ
ಸಂವಿಧಾನದ “
40 ನೇ ವಿಧಿ ” ಪಂಚಾಯಿತಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಯಿತು.
2. ಭಾರತದ ಸಂವಿಧಾನ “ 4ನೇ ಭಾಗ ” ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ
ಕಲ್ಪಿಸಲಾಗಿದೆ.
3. ಭಾರತದ ಸಂವಿಧಾನದಲ್ಲಿ ಪಂಚಾಯತ್ ರಾಜ್
ಸ್ಥಾಪನೆಗೆ ಸಂಬಂಧಿಸಿದಂತೆ “
ರಾಜ್ಯ ನಿರ್ದೇಶಕ ತತ್ವಗಳ ”
ವಿಷಯದ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ.
4. ಸ್ವತಂತ್ರ ಭಾರತದಲ್ಲಿ ಸಮುದಾಯ ಅಭಿವೃದ್ಧಿ
ಕಾರ್ಯ ಕ್ರಮಗಳನ್ನು “2
ಅಕ್ಟೋಬರ್ 1952 ” ರಲ್ಲಿ ಆರಂಭಿಸಲಾಯಿತು.
5. ಸ್ವತಂತ್ರ ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ
ವಿಸ್ತರಣಾ ಕಾರ್ಯಕ್ರಮವನ್ನು “1953” ರಲ್ಲಿ ಪ್ರಾರಂಭಿಸಲಾಯಿತು.
6. “ ಬಲವಂತ್ ರಾಯ್ ಮೆಹ್ತಾ ಸಮಿತಿ ” ಸಮುದಾಯ ಅಭಿವೃದ್ಧಿ ಮತ್ತು ರಾಷ್ಟ್ರೀಯ
ವಿಸ್ತರಣಾ ಕಾರ್ಯಕ್ರಮವನ್ನು ಅಧ್ಯಯನ ಮಾಡಲು ಮತ್ತು ಪಂಚಾಯಿತಿಗಳ ಸ್ಥಾಪನೆಗೆ ಶಿಫಾರಸ್ಸು ನೀಡಲು
ನೇಮಕಗೊಂಡ ಆಯೋಗವಾಗಿದೆ.
7. ಸ್ವತಂತ್ರ ಭಾರತದಲ್ಲಿ ಪಂಚಾಯತ್ ರಾಜ್ ಗೆ
ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ನೇಮಕಗೊಂಡ ಆಯೋಗ “ ಬಲವಂತ್ ರಾಯ್ ಮೆಹ್ತಾ ಸಮಿತಿ ”.
8. “ ಬಲವಂತ್ ರಾಯ್ ಮೆಹ್ತಾ ಸಮಿತಿ ” ಸಮಿತಿಯನ್ನು “ 16 ಜನವರಿ 1957 ” ರಲ್ಲಿ ನೇಮಕವಾಯಿತು.
9. “ ಬಲವಂತ್ ರಾಯ್ ಮೆಹ್ತಾ ಸಮಿತಿ ” ಅಧ್ಯಕ್ಷರು “ ಬಲವಂತ್ ರಾಯ್
ಜಿ ಮೆಹ್ತಾ” ರವರಾಗಿದ್ದಾರೆ.
10. “ ಬಲವಂತ ರಾಯ್ ಮೆಹ್ತಾ ಸಮಿತಿ ”ಯು “ 24 ನವೆಂಬರ್ 1957 ”
ತನ್ನ ವರದಿಯನ್ನು ಸಲ್ಲಿಸಿತು.
11. ಪಂಚಾಯ್ತ್ ರಾಜ್ ವ್ಯವಸ್ಥೆಯ ಮುಖ್ಯ ಗುರಿ “ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿ
ಇತ್ಯರ್ಥಪಡಿಸುವುದು. ಹಾಗೂ ಜನರನ್ನು ರಾಜಕೀಯವಾಗಿ ಜಾಗೃತಗೊಳಿಸುವುದು.”
12. ಭಾರತದ ಆಧುನಿಕ
ಪಂಚಾಯತ್ ರಾಜ್ ಸಂಸ್ಥೆಗಳ ಪಿತಾಮಹ ಎಂದು “ ಬಲವಂತ ರಾಯ್ ಮೆಹ್ತಾ ಸಮಿತಿ ” ರವರನ್ನು ಕರೆಯುತ್ತಾರೆ.
13. “ ಬಲವಂತ ರಾಯ್ ಮೆಹ್ತಾ ಸಮಿತಿ ”ಯು ತನ್ನ ವರದಿಯಲ್ಲಿ “ಮೂರು ಹಂತದ ” ಪಂಚಾಯತ್ ರಾಜ್ ಸ್ಥಾಪಿಸಲು ಶಿಫಾರಸ್ಸು
ಮಾಡಿತು.
14. “ ಬಲವಂತ ರಾಯ್ ಮೆಹ್ತಾ ಸಮಿತಿ ” ಸೂಚಿಸಿದ ಗ್ರಾಮ ಮಟ್ಟ, ಬ್ಲಾಕ್ ಮಟ್ಟ ಹಾಗೂ
ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳು ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಪರಿಷತ್ತು.
15. “ ಬಲವಂತ ರಾಯ್ ಮೆಹ್ತಾ ಸಮಿತಿ ” ಶಿಫಾರಸ್ಸಿನಂತೆ “ ಜಿಲ್ಲಾಧಿಕಾರಿಗಳು ”ಜಿಲ್ಲಾ ಪರಿಷತ್ತಿನ ಮುಖ್ಯಸ್ಥರಾಗಿರುತ್ತಾರೆ.
16. “ ಬಲವಂತ ರಾಯ್ ಮೆಹ್ತಾ ” ರವರು ಹುಟ್ಟಿದ ದಿನ ಫೆಬ್ರವರಿ 19 ನ್ನು “ ಕೇರಳ ” ರಾಜ್ಯದಲ್ಲಿ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ.
17. “ ಬಲವಂತ ರಾಯ್ ಮೆಹ್ತಾ ” ರವರು “ ಗುಜರಾತ್ ” ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದರು.
18. “ ಬಲವಂತ ರಾಯ್ ಮೆಹ್ತಾ ಸಮಿತಿ ”ಯು ಶಿಫಾರಸ್ಸು ಮಾಡಿದ 3 ಹಂತದ ಪಂಚಾಯತ್
ರಾಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು “ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ” 1958 ರಲ್ಲಿ ಅಂಗೀಕರಿಸಿತು.
19. “ ಬಲವಂತ ರಾಯ್ ಮೆಹ್ತಾ ಸಮಿತಿ ”ಯ ಶಿಫಾರಸ್ಸಿನಂತೆ ಮೊದಲ ಬಾರಿಗೆ “ ರಾಜಸ್ಥಾನ ” ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು
ಅನುಷ್ಛಾನಗೊಳಿಸಲಾಯಿತು.
20. ರಾಜಸ್ಥಾನದಲ್ಲಿ ಮೊಟ್ಟ ಮೊದಲ ಬಾರಿಗೆ 02
ಅಕ್ಟೋಬರ್ 1959 ರಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.
21. ರಾಜಸ್ಥಾನದ “ ನಾಗೂರು ” ನಲ್ಲಿ ಮೊಟ್ಟ ಮೊದಲ ಬಾರಿಗೆ ಪಂಚಾಯತ್ ರಾಜ್
ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ರವರು ಉಧ್ಘಾಟಿಸಿದರು.
22. ರಾಜಸ್ಥಾನದ ನಂತರ ಭಾರತದಲ್ಲಿ “ ಆಂದ್ರ ಪ್ರದೇಶ ” ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು
ಸ್ಥಾಪಿಸಲಾಯಿತು.
23. “ ಬಲವಂತ ರಾಯ್ ಮೆಹ್ತಾ ಸಮಿತಿ ” ಯು ರಾಜಕೀಯ ಪಕ್ಷಗಳ ಹೊರತಾಗಿ ಪ್ರತಿ 5
ವರ್ಷಗಳಿಗೊಮ್ಮೆ ನಿಜವಾದ ರೀತಿಯಲ್ಲಿ ಚುನಾವಣೆಯ ಮೂಲ ರಚಿಸಬೇಕೆಂದು ಶಿಫಾರಸ್ಸು ಮಾಡಿತು.
Comments
Post a Comment